ಸಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಮ್ಮ ಸರ್ಕಾರಿ ಪ್ರೌಢಶಾಲೆ ಕೋಳಕೂರನಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಸೇರಿ ನಮ್ಮ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು. ಹೀಗೆ ಸಂವಿಧಾನದ ಪ್ರಸ್ತಾವನೆಯನ್ನು ಓದುವುದರಿಂದ ಏನು ತಿಳಿಯುತ್ತದೆ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಮುಖ್ಯ ಗುರುಗಳಾದ ಶ್ರೀ ಮುಕುಂದ ಕುಲಕರ್ಣಿಯವರು ಸಂವಿಧಾನದ ಪೀಠಿಕೆಯಲ್ಲಿ ಇಡೀ ಸಂವಿಧಾನದ ಆಶಯವು ಅಡಗಿದೆ, ಒಂದು ದೇಶಕ್ಕೆ ಬೇಕಾಗಿರುವಂತಹ ಸುದೀರ್ಘವಾದ ಹಾಗೂ ಸಶಕ್ತವಾದ ಗುರಿಗಳು ಏಕತೆ, ಸಮಾನತೆ, ನ್ಯಾಯ ಹೀಗೆ ಪ್ರಮುಖವಾಗಿರ್ತಕ್ಕಂತ ಅಂಶಗಳು ಮನದಟ್ಟಾಗುತ್ತವೆ ಎಂದು ತಿಳಿಸಿದರು. ಕಳೆದ ಆಗಸ್ಟ್ನಿಂದಲೇ ನಮ್ಮ ಶಾಲೆಯಲ್ಲಿ ಶಾಲಾ ಪ್ರಾರ್ಥನೆಯ ಬಳಿಕ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯ ಓದು ನಡೆಯುತ್ತಿದೆ.
Subscribe to:
Post Comments (Atom)
No comments:
Post a Comment