ನಾನು ಯಾವಾಗಲೂ ಓದುತ್ತೇನೆ.ಶಾರ್ಕ್‌ಗಳು ಈಜುತ್ತಲೇ ಇರುತ್ತವೆ, ಇಲ್ಲವಾದಲ್ಲಿ ಅವು ಸಾಯುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ನಾನೂ ಕೂಡ ಹಾಗೆ. ಓದುವುದನ್ನು ನಿಲ್ಲಿಸಿದರೆ ಸಾಯುತ್ತೇನೆ... -- ಪ್ಯಾಟ್ರಿಕ್ ರೋಫಸ್

Friday 22 September 2023

ಅಂದು ಬರೆದ ಲೇಖನ ಇಂದು ಕನಸಾಗಿದೆ..

ಸ್ಮಾರ್ಟ್ ಕ್ಲಾಸ್ ಹೊಂದುವ ಬಗ್ಗೆ ಸುಮಾರು ವರ್ಷಗಳ  ಕನಸನ್ನೊಮ್ಮೆ ಪತ್ರಿಕೆಯಲ್ಲಿ ಹಂಚಿಕೊಂಡಿದ್ದೆ.. ಇಂದು ಆ ಕನಸು ನನಸಾಗಿದೆ. ಇಂದಿನ ನಮ್ಮ ತರಗತಿಗಳೆಲ್ಲ ಸ್ಮಾರ್ಟ್‌ ಕ್ಲಾಸ್‌ಗಳಾಗಿವೆ.. ಆ ಹಳೆಯ ಲೇಖನ ತಮಗಾಗಿ.. ಅಳವಡಿಕೆ‌ ವಿಧಾನ ಬೇರೆ ಅಷ್ಟೇ..

ಮತ್ತೊಮ್ಮೆ ನಮ್ಮ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು....

ಸಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಮ್ಮ ಸರ್ಕಾರಿ ಪ್ರೌಢಶಾಲೆ ಕೋಳಕೂರನಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಸೇರಿ ನಮ್ಮ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು. ಹೀಗೆ ಸಂವಿಧಾನದ ಪ್ರಸ್ತಾವನೆಯನ್ನು ಓದುವುದರಿಂದ ಏನು ತಿಳಿಯುತ್ತದೆ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಮುಖ್ಯ ಗುರುಗಳಾದ ಶ್ರೀ ಮುಕುಂದ ಕುಲಕರ್ಣಿಯವರು ಸಂವಿಧಾನದ ಪೀಠಿಕೆಯಲ್ಲಿ ಇಡೀ ಸಂವಿಧಾನದ ಆಶಯವು ಅಡಗಿದೆ, ಒಂದು ದೇಶಕ್ಕೆ ಬೇಕಾಗಿರುವಂತಹ ಸುದೀರ್ಘವಾದ ಹಾಗೂ ಸಶಕ್ತವಾದ ಗುರಿಗಳು ಏಕತೆ, ಸಮಾನತೆ, ನ್ಯಾಯ ಹೀಗೆ ಪ್ರಮುಖವಾಗಿರ್ತಕ್ಕಂತ ಅಂಶಗಳು ಮನದಟ್ಟಾಗುತ್ತವೆ ಎಂದು ತಿಳಿಸಿದರು. ಕಳೆದ ಆಗಸ್ಟ್‌ನಿಂದಲೇ ನಮ್ಮ ಶಾಲೆಯಲ್ಲಿ ಶಾಲಾ ಪ್ರಾರ್ಥನೆಯ ಬಳಿಕ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯ ಓದು ನಡೆಯುತ್ತಿದೆ.

ಗೆಳೆಯನ ಲ್ಯಾಬ್ ಶಿಕ್ಷಣ ವಾರ್ತೆಯಲ್ಲಿ...

ಜೂನ್ ತಿಂಗಳ ಶಿಕ್ಷಣ ವಾರ್ತೆಯಲ್ಲಿ ಅದ್ಭುತ ವಿಜ್ಞಾನ ಪ್ರಯೋಗಾಲಯದ ಬಗ್ಗೆ ಹಾಗೂ ಉತ್ತಮ ಶಾಲಾ ಪರಿಸರವನ್ನು ಹೊಂದಿರುವ ಶಾಲೆಯ ಬಗ್ಗೆ ಲೇಖನ ಪ್ರಕಟವಾಗಿರುವುದನ್ನು ತಾವು ಗಮನಿಸಬಹುದು. ಇದು ನನ್ನ ಗೆಳೆಯನಾದ ಪ್ರೇಮಕುಮಾರ ಢವಳಗಿ ಅವರ ಶಾಲೆ. ಪ್ರೇಮ್ ಕುಮಾರ ಢವಳಗಿ ನನ್ನ ಹೈಸ್ಕೂಲ್ ಗೆಳೆಯ. ಪ್ರಸ್ತುತ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಉಪಕಡ್ಡಿಯಲ್ಲಿ ವಿಜ್ಞಾನ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಶಾಲೆಯಲ್ಲಿ ಸಜ್ಜುಗೊಳಿಸಿದ ವಿಜ್ಞಾನ ಪ್ರಯೋಗಾಲಯವು ರಾಜ್ಯಕ್ಕೆ ಮಾದರಿಯಾಗುವಂತದ್ದು. ಸೂಕ್ತ ರೀತಿಯ ಮಾದರಿಗಳ ಜೋಡಣೆ ವೈಜ್ಞಾನಿಕ ಚಿತ್ರ ಬರಹಗಳು ಹಾಗೂ ಸುಸಜ್ಜಿತವಾದ ಪ್ರೊ ಪ್ರೊಜೆಕ್ಟರ್ ಸಹಿತವಾದ ಕೋಣೆ ಎಲ್ಲವೂ ವಿದ್ಯಾರ್ಥಿಗಳನ್ನು ಕಲಿಕೆಯತ್ತ ಆಕರ್ಷಿಸುತ್ತದೆ. ಪ್ರೇಮಕುಮಾರ್  ಅವರು ತಮ್ಮ ಪಾಠ ಭೋದನೆಯ ಜೊತೆಗೆ ತಮ್ಮ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಂದಲೇ ಪಠ್ಯದಲ್ಲಿನ ಪ್ರಯೋಗಗಳನ್ನು ಮಾಡಿಸುತ್ತಾರೆ. ಇದರಿಂದ ಪ್ರಭಾವಿತನದ ನಾನು ನನ್ನ ಶಾಲೆಯಲ್ಲೂ ಸಹ ಒಂದು ವಿಜ್ಞಾನ ಪ್ರಯೋಗಾಲಯವನ್ನು ಸಜ್ಜುಗೊಳಿಸಲು ಮನಸ್ಸು ಮಾಡಿದ್ದೇನೆ. ನನ್ನ ಒಂದು ಕವಿತೆ ಕೂಡ ಅದೇ‌ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದು ಖುಷಿ ನೀಡಿತು.

ತಾಲೂಕಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ 2022-23

ತಾಲೂಕಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ‌ ಸ್ಥಾನ ಪಡೆದರು